Prayers & Meditations
Kannada ·
*ದೀರ್ಘ ಅನಿವಾರ್ಯ ಪ್ರಾರ್ಥನೆ (24 ಗಂಟೆಗಳಲ್ಲಿ ಒಂದು ಸಲ ಹೇಳಬೇಕಾಗಿರುವುದು)
ಯಾರು ಈ ಪ್ರಾರ್ಥನೆಯನ್ನು ಪಠಿಸಲು ಇಚ್ಛಿಸುವನೂ, ಅವನು ಎದ್ದು ನಿಲ್ಲಲಿ ಮತ್ತು ದೇವರ ಕಡೆ ತಿರುಗಲಿ, ಹಾಗೂ ಅವನು ತನ್ನ ಜಾಗದಲ್ಲಿ ನಿಲ್ಲುತ್ತಿದ್ದಂತೆ ಕೃಪಾಳುವೂ, ದಯಾಳುವೂ ಆದ ಪ್ರಭುವಿನ ಕೃಪೆಯನ್ನು ನಿರೀಕ್ಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲಿ. ನಂತರ ಅವನು ಹೀಗೆ ಹೇಳಲಿ: ಓ ಸರ್ವ ನಾಮಾಂಕಿತಗಳ ಪ್ರಭುವೇ ಮತ್ತು ಸ್ವಗಗಳ ಸೃಷ್ಟಿಕರ್ತನೇ! ನನ್ನ ಪ್ರಾರ್ಥನೆಯನ್ನು ನಿನ್ನ ಸೌಂದರ್ಯದಿಂದ ನನ್ನನ್ನು ಮರೆ ಮಾಡಿರುವ ಪರದೆಗಳನ್ನು ದಹಿಸುವಂತಹ ಬೇಂಕಿಯಂತೆಯೂ ಹಾಗೂ ನಿನ್ನ ಸಮ್ಮುಖದ ಸಾಗರದ ಬಳಿಗೆ ಕರೆದೊಯ್ಯುವ ಪ್ರಕಾಶದಂತೆಯೂ ಮಾಡು ಎಂದು ಸರ್ವೋತ್ಕರ್ಷ ಹಾಗೂ ಮಹಾಮಹಿಮಾನ್ವಿತ ನಿನ್ನ ಅದೃಶ್ಯ ಸಾರದ ದಿನ ಚಿಲುಮೆಗಳ ಮೂಲಕ ಪ್ರಾರ್ಥಿಸುತ್ತಿದ್ದೇನೆ.
ಪೂಜ್ಯನೂ ಮತ್ತು ಸರ್ವೋತ್ಕರ್ಷನೂ ಆದ ದೇವರನ್ನು ಯಾಚಿಸಲು ಅವನು ತನ್ನ ಕೈಗಳನ್ನೆತ್ತಿ ಹೀಗೆ ಹೇಳಲಿ: ಓ ಪ್ರಪಂಚಗಳ ಆಕಾಂಕ್ಷೆಯೇ ಮತ್ತು ರಾಷ್ಟ್ರಗಳ ಪ್ರಿಯನೇ! ನಿನ್ನ ಹೊರತು ಎಲ್ಲಾ ಮೋಹಗಳಿಂದ ವಿಮುಕ್ತನಾಗಿ ನಿನ್ನೆಡೆಗೆ ತಿರುಗಿರುವುದನ್ನು ಹಾಗೂ ಯಾವುದರ ಚಲನೆಯಿಂದ ಸಮಸ್ತ ಸೃಷ್ಟಿಯೇ ಕಲಕಿ ಹೋಯಿತೋ, ಅಂತಹ ನಿನ್ನ ಪಾಶಕ್ಕೆ ನಾನು ಅಂಟಿಕೊಂಡಿರುವುದನ್ನು ನೀನು ನೋಡುತ್ತಿರುವೆ. ನಾನು ನಿನ್ನ ಸೇವಕ, ಓ ನನ್ನ ಪ್ರಭುವೇ, ಮತ್ತು ನಿನ್ನ ಸೇವಕನ ಪುತ್ರ ನಿನ್ನ ಇಚ್ಛೆ ಹಾಗೂ ಅಕಾಂಕ್ಷೆಯಂತೆ ನಡೆಯಲು ಸಿದ್ಧನಾಗಿರುವುದನ್ನೂ ಮತ್ತು ನಿನ್ನ ಸಂತೋಷವನ್ನಲ್ಲದೆ ಮತ್ತೇನನ್ನೂ ಆಶಿಸದೆ ನಿಂತಿರುವುದನ್ನೂ ನೀನು ನೋಡು. ನಿನ್ನ ಸೇವಕರ ಜೊತೆ ನಿನ್ನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನಿನ್ನ ಕೃಪಾಸಾಗರ ಹಾಗೂ ನಿನ್ನ ಅನುಗ್ರಹದ ದಿನ-ನಕ್ಷತ್ರದ ಮೂಲಕ ನಿನ್ನಲ್ಲಿ ಮೊರೆ ಇಡುತ್ತಿದ್ದೇನೆ. ಎಲ್ಲಾ ಹೇಳಿಕೆ ಮತ್ತು ಪ್ರಶಂಸೆಗೂ ಮೀರಿದ ನಿನ್ನ ಶಕ್ತಿಯಾಣೆ! ನಿನ್ನಿಂದ ಪ್ರಕಟಗೊಂಡಿರುವುದೆಲ್ಲವೂ ನನ್ನ ಹೃದಯದ ಬಯಕೆ ಮತ್ತು ನನ್ನ ಆತ್ಮದ ಅಕ್ಕರೆಯಾಗಿದೆ. ಓ ದೇವರೇ, ನನ್ನ ದೇವರೇ! ನನ್ನ ನಿರೀಕ್ಷೆ ಮತ್ತು ಕೃತಿಗಳತ್ತ ನೋಡಬೇಡ, ಬದಲಾಗಿ ಭೂಮಿ ಮತ್ತು ಸ್ವರ್ಗಗಳನ್ನು ಆವರಿಸುವಂತಹ ನಿನ್ನ ಇಚ್ಛೆಯತ್ತ ನೋಡು. ನಿನ್ನ ಮಹಾಮಹಿಮ ನಾಮಾಂಕಿತದ ಮೂಲಕ, ಓ ಎಲ್ಲಾ ರಾಷ್ಟ್ರಗಳ ಪ್ರಭುವೇ, ನೀನು ಏನನ್ನು ಆಶಿಸಿದ್ದಿಯೋ ಅದನ್ನೇ ನಾನು ಆಶಿಸಿದ್ದೇನೆ, ಮತ್ತು ನೀನು ಏನನ್ನು ಪ್ರೀತಿಸುವೆಯೋ ಅದನ್ನೇ ನಾನು ಪ್ರೀತಿಸುವೆ.
ಅವನು ಮೊಣಕಾಲೂರಿ, ಹಣೆಯನ್ನು ನೆಲಕ್ಕೆ ಬಾಗಿಸಿ ಹೀಗೆ ಹೇಳಲಿ: ನಿನ್ನ ಹೊರತು ಬೇರೆಲ್ಲಾ ವಿವರಣೆಗಳಿಗಿಂತಲೂ ಮತ್ತು ನಿನ್ನ ಹೊರತು ಬೇರೆಲ್ಲದರ ಗ್ರಹಣ ಶಕ್ತಿಗಿಂತಲೂ ನೀನು ಮಹಾಮಹಿಮನಿದ್ದೀಯೇ.
ನಂತರ ಅವನು ನಿಂತು ಹೀಗೆ ಹೇಳಲಿ : ಓ ನನ್ನ ಪ್ರಭುವೇ, ನನ್ನ ಪ್ರಾರ್ಥನೆಯನ್ನು ಜೀವಜಲದ ಕಾರಂಜಿಯನ್ನಾಗಿಸು. ಅದರಿಂಡ ನಾನು ನಿನ್ನ ಸಾರ್ವಭೌಮತ್ವವಿರುವ ತನಕ ಬಾಳುವಂತಾಗಲಿ ಮತ್ತು ನಿನ್ನ ಪ್ರಪಂಚಗಳ ಪ್ರತಿಯೊಂದು ಪ್ರಪಂಚದಲ್ಲೂ ನಿನ್ನ ಸ್ಮರಣೆ ಮಾಡುವಂತಾಗಲಿ
ಪುನಃ ಅವನು ತನ್ನ ಕೈಗಳನ್ನು ಮೇಲೆತ್ತಿ ಬೇಡುತ್ತಾ ಹೀಗೆ ಹೇಳಲಿ: ಓ ಯಾರ ಅಗಲಿಕೆಯಿಂದ ಹೃದಯಗಳು ಮತ್ತು ಆತ್ಮಗಳು ಕರಗಿದ್ದವೋ ಹಾಗೂ ಯಾರ ಪ್ರೇಮದ ಅಗ್ನಿಯಿಂದ ಇಡೀ ಪ್ರಪಂಚವೇ ಜ್ವಲಿಸಿತೋ ಅವನೇ ನೀನು! ಎಲ್ಲ ಜನರನ್ನಾಳುವವನೇ! ನಿನ್ನಲ್ಲಿರುವುದೆಲ್ಲವನ್ನೂ ನನ್ನಿಂದ ತಡೆಗಟ್ಟದಿರೆಂದು ಸಮಸ್ತ ಸೃಷ್ಟಿಯನ್ನೇ ನಿಗ್ರಹಿಸಿರುವ ನಿನ್ನ ನಾಮದ ಮೂಲಕ ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ಓ ಪ್ರಭುವೇ, ಈ ಅಪರಿಚಿತನು ನಿನ್ನ ಭವ್ಯತೆಯ ಮೇಲ್ಕಟ್ಟಿನ ಆಶ್ರಯದಲ್ಲಿರುವ ಹಾಗೂ ನಿನ್ನ ಕೃಪೆಯ ಆವರಣದಲ್ಲಿರುವ ಅವನ ಮಹೋನ್ನತವಾದ ಬೀಡಿಗೆ ತ್ವರೆಯಾಗಿ ಹೋಗುವುದನ್ನೂ, ಈ ಅತಿಕ್ರಮಿಯು ನಿನ್ನ ಕ್ಷಮಾ ಸಾಗರವನ್ನರಸುವುದನ್ನೂ; ಈ ದೀನನೂ ನಿನ್ನ ವೈಭವದ ಆಸ್ಥಾನವನ್ನೂ ಹಾಗೂ ಈ ಬಡಪಾಯಿಯು ನಿನ್ನ ಐಶ್ವರ್ಯವನ್ನು ಅರಸುವುದನ್ನೂ ನೀನು ನೋಡುತ್ತಿರುವೆ. ನಿನ್ನ ಅಪೇಕ್ಷೆಯಂತೆಯೇ ಅಪ್ಪಣೆ ನೀಡುವ ಅಧಿಕಾರ ನಿನ್ನದಾಗಿರುವುದು. ನಿನ್ನ ಕೃತಿಗಳಲ್ಲಿ ನೀನು ಪ್ರಶಂಸಿಸಲ್ಪಡಬೇಕಾಗಿರುವುದಕ್ಕೂ, ನಿನ್ನ ಅಪ್ಪಣೆಗೆ ಎಲ್ಲರೂ ಬದ್ಧರಾಗಿರಬೇಕೆಂಬುದಕ್ಕೂ ಹಾಗೂ ನಿನ್ನಾಜ್ಞೆಯಲ್ಲಿ ನಿರ್ಬಂಧದಲ್ಲಿರಬೇಕಾಗಿರುವುದಕ್ಕೂ ನಾನು ಸಾಕ್ಷಿಯಾಗಿದ್ದೇನೆ.
ನಂತರ ಅವನು ತನ್ನ ಕೈಗಳನ್ನು ಮೇಲೆತ್ತಲಿ ಹಾಗೂ ಮೂರು ಸಲ ಮಹೋನ್ನತ ನಾಮ (ಅಲ್ಹಾ-ಓ-ಅಭಾ)ವನ್ನು ಉಚ್ಚರಿಸಲಿ, ನಂತರ ಅವನು ಕೈಯನ್ನು ಮೊಣಕಾಲ ಮೇಲಿರಿಸಿ ದೇವರ ಮುಂದೆ – ಆತನು ಅನುಗ್ರಹಿತನು ಮತ್ತು ಮಹೋನ್ನತನು -ಬಗ್ಗಿ ಹೀಗೆ ಹೇಳಲಿ:
ಓ ನನ್ನ ದೇವರೇ, ಪೂಜಿಸುವ ಹೆಬ್ಬಯಕೆ ಮತ್ತು ಸ್ಮರಿಸುವ ಹಾಗೂ ಸ್ತುತಿಸುವ ಹಂಬಲಿಕೆಯಲ್ಲಿ ಹಾಗೂ ನನ್ನ ಚೈತನ್ಯವು ನನ್ನ ಕೈಕಾಲುಗಳಲ್ಲಿ ಮತ್ತು ಅಂಗಾಂಗಗಳಲ್ಲಿ ಹೇಗೆ ಕಲಕಿದೆ ಎಂಬುದನ್ನೂ, ನಿನ್ನ ನುಡಿಯ ಸಾಮ್ರಾಜ್ಯದಲ್ಲಿ ಮತ್ತು ನಿನ್ನ ಜ್ಞಾನದ ಸ್ವರ್ಗದಲ್ಲಿ ನಿನ್ನ ಆಜ್ಞೆಯ ನಾಲಿಗೆಯು ಸಾಕ್ಷಿ ನುಡಿದಿದ್ದಂತೆ ಅದು ಹೇಗೆ ಸಾಕ್ಷಿ ನುಡಿದಿದೆ ಎಂಬುದನ್ನು ನೀನು ನೋಡುತ್ತಿರುವೆ.
ಓ ನನ್ನ ಪ್ರಭುವೇ, ನಾನು ನನ್ನ ಬಡತನವನ್ನು ನಿರೂಪಿಸಿ, ನಿನ್ನ ಉದಾರತೆ ಮತ್ತು ಸಿರಿವಂತಿಕೆಯನ್ನು ದೊಡ್ಡದಾಗಿಸುವಂತೆಯೂ ಮತ್ತು ನನ್ನ ದುರ್ಬಲತೆಯನ್ನು ಘೋಷಿಸಿ ನಿನ್ನ ಶಕ್ತಿ ಮತ್ತು ವೈಭವವನ್ನು ಪ್ರತಿಪಾದಿಸುವಂತಾಗಲೆಂದು ನಿನ್ನಲ್ಲಿರುವುದೆಲ್ಲವನ್ನೂ ಪ್ರಾರ್ಥಿಸುವಂತೆ, ನಾನೀ ಸ್ಥಿತಿಯಲ್ಲಿರಲು ಇಚ್ಛಿಸುತ್ತೇನೆ. ನಂತರ ಅವನು ನಿಂತು ಕೈಗಳನ್ನು ಎರಡು ಬಾರಿ ಮೇಲೆತ್ತಿಯಾಚಿಸುತ್ತಾ ಹೀಗೆ ಹೇಳಲಿ:
ನೀನಲ್ಲದೆ ಬೇರೆ ದೇವರಿಲ್ಲ, ಸರ್ವಶಕ್ತನೂ, ಸರ್ವ ಉದಾರಿಯೂ ಆದ, ಆದಿಯಲ್ಲೂ ಮತ್ತು ಅಂತ್ಯದಲ್ಲೂ, ವಿಧೇಯಕನಾಗಿರುವ ನೀನಲ್ಲದೆ ಬೇರೆ ದೇವರಿಲ್ಲ. ಓ ದೇವರೇ ನನ್ನ ದೇವರೇ! ನಿನ್ನ ಕ್ಷಮೆಯು ನನಗೆ ಧೈರ್ಯವನ್ನು ತಂದು ಕೊಟ್ಟಿದೆ ಮತ್ತು ನಿನ್ನ ಕರುಣೆಯು ನನಗೆ ಶಕ್ತಿಯನ್ನು ಕೊಟ್ಟಿದೆ ಮತ್ತು ನಿನ್ನ ಕರೆಯು ನನ್ನನ್ನು ಎಚ್ಚರಿಸಿದೆ ಮತ್ತು ನಿನ್ನ ಅನುಗ್ರಹವು ನನ್ನನ್ನು ಮೇಲೆತ್ತಿ ನಿನ್ನೆಡೆಗೆ ಕರೆತಂದಿದೆ. ಇಲ್ಲವಾದರೆ ನಿನ್ನ ಸಾಮೀಪ್ಯದ ನಗರದ ದ್ವಾರದಲ್ಲಿ ನಿಲ್ಲಲು ಅಥವಾ ನಿನ್ನ ಇಚ್ಚೆಯ ಸ್ವರ್ಗದಿಂದ ಪ್ರಕಾಶಿಸುತ್ತಿರುವ ಬೆಳಕಿನೆಡೆಗೆ ನನ್ನ ಮುಖವನ್ನು ತಿರುಗಿಸುವ ಧೈರ್ಯ ಮಾಡಲು ನಾನ್ಯಾರು? ಓ ನನ್ನ ಪ್ರಭುವೇ, ಈ ಅನಿಷ್ಟ ಜೀವಿಯು ನಿನ್ನ ಅನುಗ್ರಹದ ಬಾಗಿಲನ್ನು ತಟ್ಟುತ್ತಿರುವುದನ್ನೂ ಮತ್ತು ಈ ಅಸ್ಥಿರ ಆತ್ಮವು ನಿನ್ನ ಅನುಗ್ರಹದ ಕೈಗಳಿಂದ ಅವಿನಾಶಿ ಜೀವನದಿಯನ್ನು ಹುಡುಕುತ್ತಿರುವುದನ್ನೂ ನೀನು ನೋಡುತ್ತಿರುವೆ. ಎಲ್ಲಾ ಕಾಲದಲ್ಲೂ ನಿನ್ನದೆ ಅಧಿಪತ್ಯ. ನೀನೇ ಎಲ್ಲಾ ನಾಮಾಂಕಿತಗಳ ಪ್ರಭುವಾಗಿರುವೆ; ಮತ್ತು ಓ ಸ್ವರ್ಗಗಳ ಸೃಷ್ಟಿಕರ್ತನೇ, ನಿನ್ನ ಇಚ್ಛೆಗೆ ನನ್ನದೆಲ್ಲವೂ ಒಪ್ಪಿಸಲ್ಪಟ್ಟಿದೆ ಹಾಗೂ ಮನಸಾರೆ ಸಮರ್ಪಿತವಾಗಿದೆ. ಅವನು ತನ್ನ ಕೈಗಳನ್ನು ಮೂರು ಬಾರಿ ಮೇಲೆತ್ತಿ ಹೀಗೆ ಹೇಳಲಿ: ಪ್ರತಿಯೊಂದು ಹಿರಿಮೆಗಿಂತಲೂ ದೇವರು ಮಹಾಮಹಿಮನಾಗಿರುವನು!
ನಂತರ ಅವನು ಮೊಣಕಾಲೂರಲಿ ಮತ್ತು ಹಣೆಯನ್ನು ನೆಲಕ್ಕೆ ಬಗ್ಗಿಸಿ ಹೀಗೆ ಹೇಳಲಿ: ನಿನ್ನ ಸಾಮೀಪ್ಯದ ಸ್ವರ್ಗವನ್ನೇರಲಿಕ್ಕಾಗಲೀ ಅಥವಾ ನಿನ್ನ ಭಕ್ತರ ಹೃದಯ ಪಕ್ಷಿಗಳು ನಿನ್ನ ಮಹಾದ್ವಾರದ ಬಾಗಿಲ ಬಳಿ ಬರಲಿಕ್ಕಾಗಲೀ, ನಿನ್ನ ಸಾಮೀಪ್ಯದಲ್ಲಿರುವವರ ಪ್ರಶಂಸೆಗೂ ಮೀರಿದವನು ನೀನು. ನೀನು ಎಲ್ಲಾ ಗುಣಗಳನ್ನೂ ಮೀರಿದ ಪರಮ ಪಾವನನು, ಎಂದು ನಾನು ಸಾಕ್ಷಿ ನುಡಿಯುತ್ತೇನೆ. ಮಹೋನ್ನತನೂ, ಸರ್ವ ಮಹಾಮಹಿಮನೂ ಆದ ನೀನಲ್ಲದೆ ಬೇರೆ ದೇವರಿಲ್ಲ.
ನಂತರ ಅವನು ಕುಳಿತುಕೊಂಡು ಹೀಗೆ ಹೇಳಲಿ: ಯಾವುದನ್ನು ಸಮಸ್ತ ಸೃಷ್ಟಿಗಳೂ, ಮೇಲಿನ ದೈವಗುಣಗಳು, ಸರ್ವೋಚ್ಛ ಸ್ವರ್ಗದ ನಿವಾಸಿಗಳು, ಎಲ್ಲದಕ್ಕಿಂತಲೂ ಮೇಲಾಗಿ ಮಹಿಮಾವಂತ ದಿಗಂತದಿಂದ ಸ್ವಯಂ ವೈಭವದ ಜಿಹ್ವೆಯೂ ನೀನೇ ದೇವರು ಮತ್ತು ನೀನಲ್ಲದೆ ಬೇರೆ ದೇವರಿಲ್ಲ ಹಾಗೂ ಪ್ರಕಟಗೊಂಡಾತನು ಒಂದು ಗುಪ್ತ ರಹಸ್ಯವೆಂದೂ, ಅತ್ಯಮೂಲ್ಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕ್ಷರಗಳು ಒಂದುಗೂಡಿ ಹೆಣೆದುಕೊಂಡಿರುವುದನ್ನೂ ಪ್ರಮಾಣಿಸಿದ್ದವೋ ಅದಕ್ಕೆ ನಾನು ಸಾಕ್ಷಿ ನುಡಿಯುತ್ತಿದ್ದೇನೆ. ಯಾರ ಹೆಸರನ್ನು ಸರ್ವೋಚ್ಛ ಲೇಖನಿಯು ಉಚ್ಚರಿಸಿತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮಿಯ ಪ್ರಭುವಾಗಿರುವ ದೇವರ ಗ್ರಂಥಗಳಲ್ಲಿ ಉಲ್ಲೇಖಿತವಾಯಿತೋ ಅದು ಆತನೆಂದು ನಾನು ಸಾಕ್ಷಿ ನುಡಿಯುತ್ತಿದ್ದೇನೆ.
ನಂತರ ಅವನು ನೆಟ್ಟಗೆ ನಿಂತು ಹೀಗೆ ಹೇಳಲಿ:
ಓ ಸರ್ವಾಸ್ತಿತ್ವಗಳ ಪ್ರಭುವೇ, ಸದೃಶ್ಯ ಮತ್ತು ಅದೃಶ್ಯ ವಸ್ತುಗಳ ಒಡೆಯನೇ! ನೀನು ನನ್ನ ಕಣ್ಣೀರನ್ನು ಮತ್ತು ನನ್ನ ನಿಟ್ಟುಸಿರನ್ನು ನೋಡುತ್ತಿರುವೆ ಮತ್ತು ನನ್ನ ನರಳಾಟವನ್ನೂ ಮತ್ತು ಗೋಳಾಟವನ್ನೂ ಹಾಗೂ ನನ್ನ ಹೃದಯದ ಶೋಕವನ್ನೂ ಆಲಿಸುತ್ತಿರುವೆ. ನಿನ್ನ ಪರಾಕ್ರಮದ ಸಾಕ್ಷಿಯಾಗಿ! ನನ್ನ ಅಪರಾಧಗಳು ನನ್ನನ್ನು ನಿನ್ನ ಸಮೀಪ ಬಾರದಂತೆ ತಡೆಗಟ್ಟಿವೆ; ಮತ್ತು ನನ್ನ ಪಾಪಗಳು ನನ್ನನ್ನು ನಿನ್ನ ಪವಿತ್ರತೆಯ ಆಸ್ಥಾನದಿಂದ ಬಹುದೂರವಿಟ್ಟಿವೆ; ಓ ನನ್ನ ಪ್ರಭುವೇ, ನಿನ್ನ ಪ್ರೀತಿಯು ನನ್ನನ್ನು ಸಿರಿವಂತನನ್ನಾಗಿಸಿದೆ, ಮತ್ತು ನಿನ್ನ ಅಗಲಿಕೆಯು ನನ್ನನ್ನು ನಾಶಪಡಿಸಿದೆ. ಹಾಗೂ ನಿನ್ನಿಂದ ದೂರವಿರುವಿಕೆಯು ನನ್ನನ್ನು ಶೋಷಿಸಿದೆ. ನಾನಿಲ್ಲಿರುವೆ, ನಾನಿಲ್ಲಿರುವೆ, ಎಂದು ನಿನ್ನ ಆರಿಸಲ್ಪಟ್ಟವರು ಈ ಅಗಾಧತೆಯಲ್ಲಿ ನುಡಿದರೋ ಆ ನುಡಿಗಳಿಂದ ಮತ್ತು ನಿನ್ನ ಸಾಕ್ಷಾತ್ಕಾರದ ಉಸಿರಿನಿಂದ ಹಾಗೂ ನಿನ್ನ ಅವತಾರದ ಮುಂಜಾನೆಯ ತಂಗಾಳಿಯಿಂದ ನಾನು ನಿನ್ನ ಸೌಂದರ್ಯವನ್ನು ನೋಡುವಂತೆಯೂ ಮತ್ತು ನಿನ್ನ ಗ್ರಂಥದಲ್ಲಿರುವುದೆಲ್ಲವನ್ನೂ ಪರಿಪಾಲಿಸುವಂತೆಯೂ ಆಜ್ಞಾಪಿಸು ಎಂದು ನಾನು ನಿನ್ನಲ್ಲಿ ನಿನ್ನ ಹೆಜ್ಜೆಗಳೊಂದಿಗೆ ಈ ನಿಸ್ಸಾರತೆಯಲ್ಲಿ ಪ್ರಾರ್ಥಿಸುತ್ತಿದ್ದೇನೆ.
ಅವನು ಬಳಿಕೆ ಮೂರು ಬಾರಿ ‘ಮಹೋನ್ನತ ನಾಮ’ (ಅಲ್ಹಾ-ಓ-ಆಭಾ)ವನ್ನು ಉಚ್ಚರಿಸಲಿ ಮತ್ತು ತನ್ನ ಕೈಯನ್ನು ಮೊಣಕಾಲ ಮೇಲಿಟ್ಟು ಬಗ್ಗಿ ಹೀಗೆ ಹೇಳಲಿ: ಓ ನನ್ನ ದೇವರೇ, ನಿನ್ನನ್ನು ಸ್ಮರಿಸುವಂತೆ ಮತ್ತು ಸ್ತುತಿಸುವಂತೆ ನೀನು ನನಗೆ ಸಹಾಯ ನೀಡಿದ್ದಕ್ಕಾಗಿ ಮತ್ತು ನಿನ್ನ ಚಿಹ್ನೆಗಳ ದಿನ ಚಿಲುಮೆಯನ್ನು ನಾನು ತಿಳಿಯುವಂತೆ ಮಾಡಿದ್ದಕ್ಕಾಗಿ ಮತ್ತು ನಾನು ನಿನ್ನ ಪ್ರಭುತ್ವಕ್ಕೇ ಶರಣಾಗುವಂತೆ ಮಾಡಿದ್ದಕ್ಕಾಗಿ ಮತ್ತು ನಿನ್ನ ದೈವತ್ವದ ಮುಂದೆ ವಿನಮ್ರನಾಗಿ ಮಾಡಿದ್ದಕ್ಕಾಗಿ ಮತ್ತು ನಿನ್ನ ವೈಭವದ ಜಿಹ್ವೆಯ ನುಡಿಗಳನ್ನು ಸ್ವೀಕರಿಸುವಂತೆ ಮಾಡಿದ್ದಕ್ಕಾಗಿ ನಿನಗೆ ಪ್ರಶಂಸೆಯಾಗಲಿ.
*ನಂತರ ಅವನು ಎದ್ದು ಹೀಗೆ ಹೇಳಲಿ:
ಓ ದೇವರೇ, ನನ್ನ ದೇವರೇ! ನನ್ನ ಬೆನ್ನು ನನ್ನ ಪಾಪದ ಹೊರೆಯಿಂದ ಬಾಗಿಹುದು ಮತ್ತು ನಿನ್ನ ನಿರ್ಲಕ್ಷತೆಯು ನನ್ನನ್ನು ನಾಶ ಮಾಡಿಹುದು. ಯಾವಾಗ ನಾನು ನನ್ನ ಕೆಟ್ಟ ಕಾರ್ಯಗಳನ್ನು ಮತ್ತು ನಿನ್ನ ಔದಾರ್ಯವನ್ನು ವಿಮರ್ಶಿಸುತ್ತೇನೋ ಆಗ ನನ್ನ ಹೃದಯವು ನನ್ನಲ್ಲೇ ಕರಗಿ ಹೋಗುವುದು ಮತ್ತು ನನ್ನ ರಕ್ತವು ನನ್ನ ನಾಡಿಗಳಲ್ಲಿ ಕುದಿಯುವುದು. ಓ ಪ್ರಪಂಚಗಳ ಆಕಾಂಕ್ಷೆಯೇ! ನಿನ್ನ ಸೌಂದರ್ಯದಾಣೆ! ನನ್ನ ಮುಖವನ್ನು ನಿನ್ನೆಡೆಗೆ ಎತ್ತಲು ನಾನು ನಾಚಿಕೆಯಿಂದ ಬಣ್ಣಗುಂದಿರುವೆ ಮತ್ತು ನನ್ನ ಹೆಬ್ಬಯಕೆಯ ಕೈಗಳು ನಿನ್ನ ಅನುಗ್ರಹದ ಸ್ವರ್ಗದೆಡೆ ಚಾಚಲು ಲಜ್ಜಿತವಾಗಿವೆ. ಓ ನನ್ನ ದೇವರೇ, ನಿನ್ನನ್ನು ಸ್ಮರಿಸಲು ಹಾಗೂ ನಿನ್ನ ಗುಣಗಾನ ಮಾಡಲು ನನ್ನ ಕಣ್ಣೀರು ಹೇಗೆ ನನ್ನನ್ನು ತಡೆಯುತ್ತಿದೆ ಎಂದು ನೀನು ನೋಡುತ್ತಿರುವೆ, ಓ ಇಹಲೋಕ ಮತ್ತು ಪರಲೋಕದ ಸಿಂಹಾಸನಾಧಿಕಾರಿಯೇ! ನಿನ್ನ ಸಾಮ್ರಾಜ್ಯದ ಚಿಹ್ನೆಗಳಿಂದ ಮತ್ತು ನಿನ್ನ ಪ್ರಭುತ್ವದ ರಹಸ್ಯಗಳ ಮೂಲಕ ನಿನ್ನ ಔದಾರ್ಯದಂತೆ ನಿನ್ನ ಪ್ರೀತಿಪಾತ್ರರನ್ನು ನಡೆಸಿಕೋ ಎಂದು ನಾನು ನಿನ್ನಲ್ಲಿ ಬೇಡುವೆನು. ಓ ಸರ್ವಾಸ್ತಿತ್ವದ ಪ್ರಭುವೇ, ಮತ್ತು ನಿನ್ನ ಅನುಗ್ರಹಕ್ಕೆ ಪಾತ್ರನು, ಓ ಗೋಚರ ಮತ್ತು ಅಗೋಚರ ಸಾಮ್ರಾಟನೇ! ನಂತರ ಅವನು ‘ಮಹೋನ್ನತ ನಾಮ’ (ಅಲ್ಹಾ-ಓ –ಆಭಾ)ವನ್ನು ಮೂರು ಸಲ ಉಚ್ಚರಿಸಲಿ ಮತ್ತು ತನ್ನ ಹಣೆಯನ್ನು ನೆಲಕ್ಕೆ ಮುಟ್ಟಿಸಿ ಹೀಗೆ ಹೇಳಲಿ:
ಓ ನಮ್ಮ ದೇವರೇ, ನೀನು ನಮ್ಮನ್ನು ನಿನ್ನ ಸಾಮೀಪ್ಯಕ್ಕೆ ಸೆಳೆಯುವಂತಹದ್ದನ್ನು ಕರುಣಿಸಿದ್ದಕ್ಕಾಗಿ ಮತ್ತು ನಿನ್ನಿಂದ ಕಳುಹಿಸಲ್ಪಟ್ಟ ನಿನ್ನ ಪುಸ್ತಕಗಳು ಮತ್ತು ನಿನ್ನ ಗ್ರಂಥಗಳಲ್ಲಿರುವ ಪ್ರತಿಯೊಂದು ಒಳ್ಳೆಯ ವಸ್ತುವನ್ನೂ ನೀನು ಪೂರೈಸಿರುವುದಕ್ಕಾಗಿ ನಿನಗೆ ಪ್ರಶಂಸೆಯಾಗಲಿ. ಓ ನನ್ನ ಪ್ರಭುವೇ, ಅಪ್ರಯೋಜಕ ಕಲ್ಪನೆಗಳಿಂದ ಮತ್ತು ವ್ಯರ್ಥ ಅಲೋಚನೆಗಳಿಂದ ನಮ್ಮನ್ನು ರಕ್ಷಿಸೆಂದು ನಾವು ನಿನ್ನಲ್ಲಿ ಬೇಡಿಕೊಳ್ಳುವೆವು. ನಿಜವಾಗಿಯೂ, ನೀನು ಪರಾಕ್ರಮಿ ಮತ್ತು ಸರ್ವಜ್ಞ.
ನಂತರ ಅವನು ತನ್ನ ತಲೆಯನ್ನು ಎತ್ತಲಿ ಮತ್ತು ಕುಳಿತುಕೊಂಡು ಹೀಗೆ ಹೇಳಲಿ
ನಿನ್ನಿಂದ ಆರಿಸಲ್ಪಟ್ಟವರು ಸಾಕ್ಷಿ ನುಡಿದಿದ್ದಕ್ಕೂ, ಮತ್ತು ಒಪ್ಪಿಕೊಂಡಿರುವುದಕ್ಕೂ, ಸರ್ವೋಚ್ಚ ಸ್ವರ್ಗದ ನಿವಾಸಿಗಳು ಮತ್ತು ನಿನ್ನ ಮಹಾಸಿಂಹಾಸನದ ಪ್ರದಕ್ಷಿಣೆ ಮಾಡಿದವರು ಒಪ್ಪಿಕೊಂಡಿದ್ದಕ್ಕೂ ನಾನು ಸಾಕ್ಷಿ ನುದಿಯುತ್ತೇನೆ. ಭೂಮಿ ಮತ್ತು ಸ್ವರ್ಗದಲ್ಲಿರುವ ಸಾಮ್ರಾಜ್ಯಗಳೆಲ್ಲವೂ ನಿನ್ನವೇ, ಓ ಪ್ರಪಂಚಗಳ ಪ್ರಭುವೇ!
*(ಈಗ ಶಾಸನವನ್ನು ಬಾಬ್ ಹಾಗೂ Baha’u’llah ರವರ ಪವಿತ್ರ ಸಮಾಧಿಗಳ ಬಳಿ ಪಠಿಸಲಾಗುತ್ತದೆ. ಆಗಾಗ್ಗೆ ಅವರ ಜಯಂತಿಗಳ ಸ್ಮರಣೋತ್ಸವದಲ್ಲೂ ಇದನ್ನು ಉಪಯೋಗಿಸಲಾಗುತ್ತದೆ.) ಓ ಮಹಾವೈಭವದ ಅವತಾರವೇ ಮತ್ತು ಚಿರಂತನತೆಯ ದೊರೆಯೇ ಹಾಗೂ ಭೂಮಿ ಮತ್ತು ಸ್ವರ್ಗದಲ್ಲಿರುವವರೆಲ್ಲರ ಪ್ರಭುವೇ, ನಿನ್ನ ಪರಮ ಶ್ರೇಷ್ಠ ಆತ್ಮದಿಂದಲೇ ಉದಯಿಸಿರುವ ಪ್ರಶಂಸೆ ಹಾಗೂ ನಿನ್ನ ಪ್ರಕಾಶಮಾನವಾದ ಸೌಂದರ್ಯದಿಂದ ಕಂಗೊಳಿಸಿರುವ ವೈಭವವು ನಿನ್ನ ಮೇಲಿರಲಿ! ನಿನ್ನಿಂದಲೇ ದೇವರ ಪ್ರಭುತ್ವ ಮತ್ತು ಆತನ ಸಾಮ್ರಾಜ್ಯ, ಹಾಗೂ ದೇವರ ಭವ್ಯತೆ ಮತ್ತು ಆತನ ಗಾಂಭೀರ್ಯ ಪ್ರಕಟಗೊಂಡಿರುವವೆಂದೂ, ಹಾಗೂ ನಿನ್ನ ಬದಲಾಯಿಸಲಾಗದ ಶಾಸನದ ಸ್ವರ್ಗದಲ್ಲಿ ಪುರಾತನ ವೈಭವದ ದಿನ ನಕ್ಷತ್ರಗಳು ತಮ್ಮ ಕಾಂತಿಯನ್ನು ಪಸರಿಸಿವೆಯೆಂದೂ ಹಾಗೂ ಅದೃಶ್ಯ ಸೌಂದರ್ಯವು ಸೃಷ್ಟಿಯ ದಿಗಂತದ ಮೇಲೆ ಪ್ರಕಾಶಿಸಿರುವುದೆಂದೂ ನಾನು ಸಾಕ್ಷಿ ನುಡಿಯುತ್ತೇನೆ. ಅದೂ ಅಲ್ಲದೆ, ನಿನ್ನ ಲೇಖನಿಯ ಕೇವಲ ಒಂದು ಚಲನೆ ಮಾತ್ರದಿಂದ ನಿನ್ನಾಜ್ಞೆಯಾದ ‘ನೀನಿರು’ ಜಾರಿಗೆ ಬಂದಿರುವುದಕ್ಕೂ ಮತ್ತು ದೇವರ ನಿಗೂಢ ರಹಸ್ಯವು ಪ್ರಕಟಗೊಂಡಿರುವುದಕ್ಕೂ; ಮತ್ತು ಎಲ್ಲಾ ಸೃಷ್ಟಿಗಳು ಅಸ್ತಿತ್ವಕ್ಕೆ ಬರುವಂತೆ ಕರೆ ನೀಡಿರುವುದಕ್ಕೂ ಹಾಗೂ ಎಲ್ಲಾ ಪ್ರಕಟಣೆಗಳನ್ನು ಭೂಮಿಯ ಮೇಲೆ ಕಳುಹಿಸಲಾಗಿದ್ದಕೂ ನಾನು ಸಾಕ್ಷಿ ನುಡಿಯುತ್ತೇನೆ.
ಇಷ್ಟೂ ಅಲ್ಲದೆ, ನಿನ್ನ ಸೌಂದರ್ಯದಿಂದಲೇ ಪೂಜಿಸಲ್ಪಟ್ಟವನ ಸೌಂದರ್ಯವು ಅನಾವರಣವಾಯಿತೆಂದೂ, ನಿನ್ನ ಮುಖದಿಂದಲೇ ಅಪೇಕ್ಷಿಸಲ್ಪಟ್ಟವನ ಮುಖಾರವಿಂದವು ಶೋಭಿತಗೊಂಡಿತೆಂದೂ, ಹಾಗೂ ಸೃಷ್ಟಿಗಳ ಮಧ್ಯೆ, ನಿನ್ನ ಭಕ್ತರು ವೈಭವದ ಶಿಖರಕ್ಕೇರುವ ಹಾಗೂ ದೈವ ಪ್ರತಿಭಟಕರು ಪಾತಾಳಕ್ಕಿಳಿಯುವ ನಿರ್ಣಯವು ನಿನ್ನ ಒಂದು ನುಡಿಯ ಮೂಲಕ ಆಯಿತೆಂಬುದಕ್ಕೂ ನಾನೇ ಸಾಕ್ಷಿಯಾಗಿದ್ದೇನೆ. ಯಾರು ನಿನ್ನನ್ನು ಅರಿತಿದ್ದಾನೋ ಅವನು ದೇವರನ್ನು ಅರಿತಿದ್ದಾನೆ, ಹಾಗೂ ಸಾನ್ನಿಧ್ಯವನ್ನು ಪಡೆದಿದ್ದಾನೆ, ಎಂಬುದಕ್ಕೆ ನಾನೇ ಸಾಕ್ಷಿ. ಆದ್ದರಿಂದ, ಯಾರು ನಿನ್ನಲ್ಲಿ ಮತ್ತು ನಿನ್ನ ಚಿಹ್ನೆಗಳಲ್ಲಿ ವಿಶ್ವಾಸವಿಟ್ಟಿರುವನೋ, ಹಾಗೂ ನಿನ್ನ ಸಾರ್ವಭೌಮತ್ವದ ಮುಂದೆ ವಿನೀತನಾಗಿರುವನೋ, ನಿನ್ನನ್ನು ಭೇಟಿ ಮಾಡುವ ಗೌರವವನ್ನು ಪಡೆದಿರುವನೋ, ಹಾಗೂ ನಿನ್ನ ಇಚ್ಛೆಯ ಆನಂದವನ್ನು ಪಡೆದಿರುವನೋ, ಹಾಗೂ ನಿನ್ನ ಪ್ರದಕ್ಷಿಣೆ ಮಾಡಿರುವನೋ, ಮತ್ತು ನಿನ್ನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನ್ಯತೆಯೇ ಮಹಾನ್, ಯಾರು ನಿನ್ನನ್ನು ಉಲ್ಲಂಘಿಸಿರುವನೋ, ನಿನ್ನನ್ನು ಅಲ್ಲಗಳೆದಿರುವನೋ, ನಿನ್ನ ಚಿಹ್ನೆಗಳನ್ನು ನಿರಾಕರಿಸಿರುವನೋ, ನಿನ್ನ ಪ್ರಭುತ್ವವನ್ನು ವಿರೋಧಿಸಿರುವನೋ, ನಿನ್ನ ವಿರುದ್ಧಿ ಎದ್ದಿರುವನೋ, ನಿನ್ನ ಮುಖಾರವೈಂದದೆದುರು ಅಹಂಕಾರವನ್ನು ತೋರ್ಪಡಿಸಿರುವನೋ, ನಿನ್ನ ಸಾಕ್ಷ್ಯಾಧಾರಗಳನ್ನು ಖಂಡಿಸಿರುವನೋ, ನಿನ್ನ ಶಾಸನ ಮತ್ತು ನಿನ್ನ ಸಾಮ್ರಾಜ್ಯದಿಂದ ದೂರ ಸರಿದಿರುವನೋ, ನಿನ್ನ ಪವಿತ್ರ ಶಾಸನಗಳಲ್ಲಿ ನಿನ್ನ ಆಜ್ಞೆಯ ಬೆರಳುಗಳಿಂದ ಕೊರೆಯಲ್ಪಟ್ಟ ದೈವಪ್ರತಿಭಟಕರಲ್ಲಿ ಯಾರ ಹೆಸರು ಎಣಿಸಲ್ಪಟ್ಟಿದೆಯೋ ಅಂಥವರಿಗೆ ಸಂಕಟಗಳು ಬರಲಿ.
ಓ ನನ್ನ ದೇವರೇ ಮತ್ತು ನನ್ನ ಪ್ರಿಯತಮನೇ, ನಿನ್ನ ಕರುಣೆಯ ಬಲಗೈಯಿಂದ ಮತ್ತು ನಿನ್ನ ಪ್ರೇಮಪೂರಿತ ದಯೆಯಿಂದ ನಿನ್ನ ಅನುಗ್ರಹಗಳ ಉಸಿರಿನ ತಂಗಾಳಿಯನ್ನು ನನ್ನ ಮೇಲೆ ಹರಿಸು ಅದರಿಂದ ಅವು ನನ್ನನ್ನು ನನ್ನಿಂದ ಮತ್ತು ಈ ಲೋಕದಿಂದ ದೂರ ಮಾಡಿ ನಿನ್ನ ಸಾಮೀಪ್ಯ ಹಾಗೂ ನಿನ್ನ ಸಾನ್ನಿಧ್ಯದ ಆಸ್ಥಾನಗಳೆಡೆ ಕರೆದೊಯ್ಯಲಿ, ನಿನ್ನಿಚ್ಛೆಯಂತೆಯೇ ಮಾಡುವ ಸಾಮಥ್ರ್ಯವುಳ್ಳವನು ನೀನೇ. ನಿಜವಾಗಿಯೂ, ನೀನು ಎಲ್ಲಾ ವಸ್ತುಗಳ ಮೇಲೂ ಶ್ರೇಷ್ಠನಾಗಿದ್ದೀಯೇ.
ದೇವರ ಸ್ಮರಣೆ, ಆತನ ಪ್ರಶಂಸೆ, ದೇವರ ಜ್ಯೋತಿ ಹಾಗೂ ಆತನ ಭವ್ಯತೆಯು ಆತನ ಸೌಂದರ್ಯನಾಗಿರುವ ನಿನ್ನ ಮೇಲಿರಲಿ! ಸೃಷ್ಠಿಯ ಕಣ್ಣುಗಳು ದಬ್ಬಾಳಿಕೆಗೊಳಪಟ್ಟ ನಿನ್ನಂಥವವನ್ನು ಎಂದೂ ನೋಡಿರಲಿಕ್ಕಿಲ್ಲ ಎಂಬುದಕ್ಕೆ ನಾನೇ ಸಾಕ್ಶಿ. ನಿನ್ನ ಬಾಳಿನ ಎಲ್ಲಾ ದಿನಗಳಲ್ಲೂ ನೀನು ಯಾತನೆಗಳ ಸಾಗರದ ತರದಲ್ಲಿ ಮುಳುಗಿದ್ದೆ. ಒಂದು ಸಮಯದಲ್ಲಿ ನೀನು ನಿನ್ನ ಶತ್ರುಗಳ ಖಡ್ಗಗಳಿಂದ ಬೆದರಿಸಲ್ಪಟ್ಟಿದ್ದೆ. ಇಷ್ಟೆಲ್ಲಾ ಆದರೂ, ನಿನಗೆ ಸರ್ವಜ್ಞ ಹಾಗೂ ಸರ್ವಪ್ರಜ್ಞನು ವಿಧಿಸಲ್ಪಟ್ಟಿರುವುದನ್ನು ಮನುಷ್ಯರೆಲ್ಲರೂ ಆಚರಿಸುವಂತೆ ನೀನು ಆಜ್ಞೆ ಮಾಡಿರುವೆ.
ನನ್ನ ಚೈತನ್ಯವು ನೀನನುಭವಿಸಿದ ನಿಂದನೆಗೆ ಅಹುತಿಯಾಗಲಿ ಮತ್ತು ನನ್ನ ಆತ್ಮವು ನೀನು ಸಹಿಸಿರುವ ವಿಪತ್ತುಗಳ ವಿಮುಕ್ತಿಯ ಬೆಳೆಯಾಗಲಿ. ನಿನ್ನಿಂದ ಹಾಗೂ ನಿನ್ನ ಮುಖಾರವಿಂದದ ಪ್ರಕಾಶದ ವೈಭವದಿಂದ ಯಾರ ಮುಖಗಳು ಪ್ರಕಾಶಿತಗೊಂಡವೋ, ಅವರಿಂದ ಹಾಗೂ ಯಾರು ನಿನ್ನ ಪ್ರೀತಿಗೋಸ್ಕರವಾಗಿ ಅವರಿಗೆ ಆಜ್ಞಾಪಿಸಿರುವುದನ್ನೆಲ್ಲಾ ಆಚರಿಸುವರೋ ಅವರಿಂದ, ನೀನು ಮತ್ತು ನಿನ್ನ ಸೃಷ್ಟಿಗಳ ನಡುವೆ ಬಂದಿರುವ ಪರದೆಗಳನ್ನು ತೆಗೆದುಹಾಕುವಂತೆಯೂ ಹಾಗೂ ಈ ಪ್ರಪಂಚ ಮತ್ತು ಮುಂದಿನ ಪ್ರಪಂಚದ ಒಳ್ಳೆಯದನ್ನು ದಯಪಾಲಿಸೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನೀನು ಸತ್ಯವಾಗಿಯೂ ಸರ್ವಶಕ್ತನೂ, ಪರಮೋತ್ತಮನೂ, ಸಕಲ ವೈಭವಪೂರಿತನೂ, ಸದಾ ಕ್ಷಮಾಶೀಲನೂ, ಮಹಾಕೃಪಾಕರನೂ ಆಗಿರುವೆ.
ಓ ಪ್ರಭುವೇ, ನನ್ನ ದೇವರೇ, ದಿವ್ಯ ಕಲ್ಪವೃಕ್ಷ ಮತ್ತದರ ಎಲೆಗಳು, ಮತ್ತದರ ಟೊಂಗೆಗಳು, ಮತ್ತದರ ರೆಂಬೆಗಳು, ಮತ್ತದರ ಕಾಂಡಗಳು, ಮತ್ತದರ ಉಪಶಾಖೆಗಳು ನಿನ್ನ ಮಹಾಉಪಾಧಿಗಳಿರುವ ತನಕ ಹಾಗೂ ನಿನ್ನ ಪ್ರಭಾವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕ್ರಮಣಕಾರರ ಹಾವಳಿ ಮತ್ತು ನಿರಂಕುಶಾಧಿಕಾರವುಳ್ಳ ಅತಿಥೇಯರಿಂದ ಅದನ್ನು ರಕ್ಷಿಸು. ನೀನು, ಸತ್ಯವಾಗಿಯೂ, ಪರಾಕ್ರಮಶಾಲಿಯೂ, ಮಹಾಬಲನೂ ಆಗಿರುವೆ. ನಿನ್ನನ್ನು ಪಡೆದ ನಿನ್ನ ಸೇವಕರನ್ನು ಹಾಗೂ ನಿನ್ನ ಸೇವಕಿಯರನ್ನು ಹರಸು, ಓ ಪ್ರಭುವೇ ನನ್ನ ದೇವರೇ, ಸತ್ಯವಾಗಿಯೂ ನೀನು ಸರ್ವ ಉದಾರಿ, ನಿನ್ನ ಅನುಗ್ರಹ ಅಪಾರ. ಸರ್ವಕ್ಷಮಾಶೀಲನೂ ಪರಮದಾನಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.
*(ಟೆಹರಾನಿನ ಸಿಯಾಚಾಲ್ ಕಪ್ಪುಗುಂಡಿಯಲ್ಲಿ ಬಂಧಿತ ಬಾಬಿಗಳು ಪಠಿಸುತ್ತಿದ್ದ ಮಂತ್ರ: ದೇವರು ನನಗೆ ತೃಪ್ತಿಪಡಿಸುವಷ್ಟಿದ್ದಾನೆ; ನಿಶ್ಚಯವಾಗಿಯೂ, ಆತನು ಸರ್ವಸಂತೃಪ್ತದಾತನು! ವಿಶ್ವಾಸವಿರುವವರು ಆತನಲ್ಲಿ ವಿಶ್ವಾಸವನ್ನಿಡಲಿ.
*ರವರು ಚಿಕ್ಕ ಮಧ್ಯಮ ಮತ್ತು ದೀರ್ಘವೆಂಬ ಮೂರು ಅನಿವಾರ್ಯ ಪ್ರಾರ್ಥನೆಗಳನ್ನು ಅನುಗ್ರಹಿಸಿರುವರು. ಇವುಗಳಲ್ಲಿ ಯಾವುದಾದರೊಂದನ್ನೂ ಅಯ್ದುಕೊಂಡರೆ ನಾವು ನಮ್ಮ ಕರ್ತವ್ಯವನ್ನು ಪಾಲಿಸಿದಂತಾಗುವುದು) ಚಿಕ್ಕ ಅನಿವಾರ್ಯ ಪ್ರಾರ್ಥನೆ
*(ಪ್ರತಿ ದಿನ ಮಧ್ಯಾನ್ಹ 12 ಗಂಟೆಯಿಂದ ಸೂರ್ಯಾಸ್ತದೊಳಗೆ ಒಂದು ಬಾರಿ ಕಡ್ಡಾಯವಾಗಿ ಪಠಿಸಲೇಬೇಕಾದ ಚಿಕ್ಕ ಅನಿವಾರ್ಯ ಪ್ರಾರ್ಥನೆ)
ಓ ನನ್ನ ಪರಮಾತ್ಮನೇ, ನಿನ್ನನ್ನು ಅರಿಯಲು ಹಾಗೂ ಆರಾಧಿಸಲು ನನ್ನನ್ನು ನೀನು ಸೃಷ್ಟಿಸಿದೆ. ಅದಕ್ಕೆ ನಾನೇ ಸಾಕ್ಷಿ. ನಾನು ಬಲಹೀನ, ನೀನು ಬಲಶಾಲಿ ನಾನು ಬಡವ, ನೀನು ಸಿರಿವಂತ, ಇದನ್ನು ನಾನು ಸಾರಿ ಹೇಳುತ್ತೇನೆ. ನೀನಲ್ಲದೆ ಬೇರೆ ದೇವರಿಲ್ಲ, ಆಪತ್ತಿನಲ್ಲಿ ನೀನೇ ರಕ್ಷಕ ಸ್ವಯಂಪರಿಪೂರ್ಣ.